Thursday, January 29, 2009

ಹೊಸ ವರ್ಷದ ಆಚರಣೆ...೨೦೦೯.

ಪ್ರತೀ ವರ್ಷದ ಕೊನೆಯ ದಿನ ಬೆಂದಕಾಳುರನ್ನು ಬಿಟ್ಟು, ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಕೈಗೊಂಡು ಹೊಸ ವರ್ಷವನ್ನು ಸ್ವಾಗತಿಸುವುದು ನಮ್ಮ ಅಭ್ಯಾಸವಾಗಿತ್ತು.


ಆದ್ರೆ ಈ ಸಲ ಡಿಸೆಂಬರ್ ೩೧ ಬುಧವಾರ ಬಂದಿದ್ದು, ಗುರುವಾರ ಆಫೀಸ್ ಗೆ ರಜ ಇಲ್ಲದ ಕಾರಣ ನಮ್ಮ ಪ್ರವಾಸ ಕ್ಯಾನ್ಸಲ್ ಆಗಿತ್ತು.ಬುಧವಾರ ಸಂಜೆಯತನಕ ಎಲ್ಲರೂ ಅವರವರ ಮನೆಯಲ್ಲಿ ಹೊಸ ವರ್ಷದ ಆಚರಣೆ ಅಂಥ ತೀರ್ಮಾನ ಮಾಡಿದ್ದೆವು. ಡಿಂಗನಿಗೆ ಆಫೀಸ್ನಲ್ಲಿ ನೈಟ್ ಶಿಫ್ಟ್ ಬೇರೆ...!!! ಹೋಗಲೇ ಬೇಕೆಂದು ದೂದ್ ಆಫೀಸ್ ಗೆ ರಜ ಹಾಕಿದ್ದ..!!! ನಾವೆಲ್ಲ ಬರೋಲ್ಲ ಅಂಥ ಹೇಳಿದಾಗ ಸಿಕ್ಕಾಪಟ್ಟೆ ಕೋಪ ಬಂದಿತ್ತು ಅವನಿಗೆ....!!! No Much happening this year end.. :-(

ಸಂಜೆ ನಾನು ಮನೆಗೆ ವಾಪಾಸ್ ಹೋಗ್ತಾಯಿರೋವಾಗ ಡಿಂಗ ಫೋನ್ ಮಾಡಿದ...!! ಇವತ್ತು ಆಫೀಸ್ ಇಂದ ಬೇಗ ಬರ್ತಾ ಇದೀನಿ, ನ್ಯೂ ಇಯರ್ ಪಾರ್ಟಿ ಗೆ ರೆಡಿ ಮಾಡು ಅಂದ.

Happening begins...!! :-)

ಸೊ ನಾನು ಗಡಿಬಿಡಿಯಲ್ಲಿ ಅರವಿಂದನಿಗೆ, ದೂದ್ಗೆ ಫೋನ್ ಮಾಡಿದೆ...ಸೀದಾ ನಮ್ಮ ಮನೆಗೆ ಬನ್ನಿ ಅಂಥ...! ದೂದ್ ಮೊದಲು ನಂಬಲಿಲ್ಲ, ಕೊನೆಗೆ ಅವನೇ ಮೊದಲು ಬಂದಿದ್ದು...!
ನಾನು ಸ್ವಲ್ಪ ತರಕಾರಿ ತಗೊಂಡು ಮನೆಗೆ ಹೋದೆ....! ಅರವಿಂದ + ಅರವಿಂದ ( ಡಿಂಗ ನ ಕಸಿನ್ ಬ್ರದರ್)(ಅಭಿ - ಅವನ ಶಾರ್ಟ್ ನೇಮು) ಸರಿಯಾದ ಸಮಯಕ್ಕೆ ಮನೆಗೆ ಬಂದ್ರು..ಎಲ್ಲ ಸೇರಿ ಪ್ಲಾನ್ ರೆಡಿ ಮಾಡಿದ್ವಿ.ನಾನು ಮತ್ತೆ ದೂದ್ ಹೋಗಿ ಕೇಕ್ ತಂದ್ವಿ...ಅವತ್ತಿನ ದಿನ ಎಲ್ಲ ಬೇಕರಿ ಅಂಗಡಿ ಫುಲ್ ರಷ್ಯು..!!ಅಭಿ ಒಂದಷ್ಟು ದಿಢೀರ್ ತಿಂಡಿ ರೆಡಿ ಮಾಡಿದ...! ನಾನು ಚಿತ್ರಾನ್ನ ಕಲಸಿದೆ...( ೮ ವರ್ಷದ ಅನುಭವ ಇದೆ)

ಡಿಂಗ ಮನೆಗೆ ಬಂದಾಗ ೧೦ ಗಂಟೆ ಆಗಿತ್ತು. ಎಲ್ಲರೂ ಸೇರಿ ಪಾನೀಯ ಸೇವಿಸಿ, ತಿಂಡಿ ತಿಂದು ಮೊದಲ ಹಂತದ ಕೊನೆಗೆ ಬಂದಿದ್ದೆವು...

ಸರಿಯಾಗಿ ೧೨ ಗಂಟೆಗೆ ಕೇಕ್ ಕಟ್ ಮಾಡಿ, ಎಲ್ಲರಿಗೂ ವಿಶ್ ಮಾಡಿದ್ವಿ...!! ಅರವಿಂದ ಸ್ವಲ್ಪ ಜೋಶ್ ನಲ್ಲೆ ಇದ್ದ...ಇದು ಅವನ ಕೊನೆಯ ಅವಿವಾಹಿತ ಹೊಸ ವರ್ಷದ ಆಚರಣೆ..!! ಹೊಟ್ಟೆ ತುಂಬಾ ಊಟ ಮಾಡಿ ಮಲಗಿದಾಗ ಗಂಟೆ ೩... !! ಇರೋದ್ರಲ್ಲೇ ಸಕತ್ ಮಜ ಇತ್ತು..!

೧ ನೆ ತಾರೀಕು ಆಫೀಸ್ ಗೆ ಬರಲೇ ಬೇಕಿತ್ತು...., ಅರವಿಂದ ಅವತ್ತಿಂದ ಇವತ್ತಿನ ತನಕ ವಟಗುಟ್ಟುತ್ತಲೇ ಇದ್ದಾನೆ... " ಮಕ್ಕಳ್ರಾ, ನ್ಯೂ ಇಯರ್ ದಿನ ಎಲ್ಲೂ ಹೋಗಿಲ್ಲ, ಸೊ ವರ್ಷ ಪೂರ್ತಿ ಎಲ್ಲೂ ಹೋಗಕೆ ಆಗೋಲ್ಲ...!!"ಸ್ವಲ್ಪ ನಿಜ ಇದ್ರೂ ಇರಬಹುದು...!! ಮೊನ್ನೆ ೪ ದಿನ ಲಾಂಗ್ ವೀಕೆಂಡ್ ಇದ್ರೂ ನಮಗೆ ಎಲ್ಲೂ ಹೋಗಲಾಗಲಿಲ್ಲ...!!ನೋಡೋಣ....ಉಳಿದ ದಿನಗಳು ಇನ್ನೂ ೩೩೬..!

Wednesday, January 28, 2009

ವಯನಾಡ್ ಪ್ರವಾಸ.....

ಡಿಂಗ ಅವತ್ತು ತುಂಬ ಖುಷಿ ಆಗಿದ್ದ, ಮಾನಸ ಊರಿಗೆ ಹೋದ ಕಾರಣ ಅವನು ಫ್ರೀ...!!
ತುಂಬ ದಿನಗಳ ನಂತರ ಎಲ್ಲರೂ ಸೇರಿ ಪ್ರವಾಸ ಹೋಗುವುದೆಂದು ತೀರ್ಮಾನ ಮಾಡಿದ.
ಅದರಂತೆ ಡಿಸೆಂಬರ್ ೨೦ ರಂದು ಮುಂಜಾನೆ ೩.೩೦ ಕ್ಕೆ ಬೆಂಗಳೂರು ಬಿಟ್ಟು ಮೈಸೂರ್ ದಾರಿ ಹಿಡಿದೆವು.ಬೆಳಿಗ್ಗೆ ಬೆಳಿಗ್ಗೆ ಸಕತ್ ಛಳಿ, ಇಬ್ಬನಿ, ೫ ಜನ ಗೆಳೆಯರು, ೧ ಝೆನ್ ಕಾರು.....!!ಡಿಂಗ ಸ್ವಲ್ಪ ಮುನಿಸಿಕೊಂಡು ಬಿಟ್ಟಿದ್ದ...!! ಅವನ ಕೋಪ ಶಮನಕ್ಕೆ ತಣ್ಣಗಿನ "ಯುಬೀ ನೀರು" ಬೇಕಾಯ್ತು.

ಪ್ಲಾನ್ ಪ್ರಕಾರ ನಾವು ಬೆಳಿಗ್ಗೆ ೭ ಗಂಟೆಗೆ "ನಾಗರಹೊಳೆ" ಅಭಯಾರಣ್ಯವನ್ನ ಪ್ರವೇಶ ಮಾಡಿದೆವು. ಆನೆ, ಕಾಡು ಜಿಂಕೆ ಬಿಟ್ಟರೆ ಬೇರ್ಯಾವುದೇ ಕಾಡು ಪ್ರಾಣಿ ನಮಗೆ ಎದುರಾಗಲಿಲ್ಲ....ಮತ್ತೆ ಸ್ವಲ್ಪ ನಿರಾಶೆ ಎಲ್ಲರ ಮುಖದಲ್ಲಿ...ದೂದ್ ಪೇಡ ಸ್ವಲ್ಪ ಖುಷಿ ಯಲ್ಲಿದ್ದ.......! ಝೆನ್ ಕಾರು ೮೦ ಕಿ. ಮೀ. ಕ್ಕೂ ಜಾಸ್ತಿ ಸ್ಪೀಡ್ನಲ್ಲಿ ಹೋಗ್ತಾ ಯಿತ್ತು...!!! ಗಡಿಭಾಗದ "ಕುಟ್ಟ" ಪಟ್ಟಣ ತಲುಪಿದಾಗ ೮.೩೦ ಆಗಿತ್ತು. ಡಿಂಗ ಮೊದಲೇ "ನಾರಿಕಡಿ " ಹೋಂ ಷ್ಟೇ ಬುಕ್ ಮಾಡಿದ್ದ. ಸುಂದರ ಕಾಫಿ ಎಸ್ಟೇಟ್ ಮಧ್ಯದಲ್ಲಿ, ಕೊಡವ ಮನೆತನದವರು ಪ್ರೀತಿಯಿಂದ, ಆದರದಿಂದ ಕೂಡಿದ ಸತ್ಕಾರ ನಿಜಕ್ಕೂ ಗ್ರೇಟ್...!! ತುಂಬಾ ಯಿಷ್ಟ ಆಗುತ್ತೆ...!!ಉಪಾಹಾರ ನಿಮಿತ್ತ ಮಾಡಿದ್ದು ರೊಟ್ಟಿ, ಪಲ್ಯ, ಜಾಮ್, ತುಪ್ಪ, ಬ್ರೆಡ್ ಅಮ್ಲೆಟ್, ಎಗ್ಗ್ ಕರಿ, ಶಾವಿಗೆ ಉಪ್ಪಿಟ್ಟು. ..ಬಿಸ್ಸಿ ಬಿಸ್ಸಿ ಕಾಫಿ..!! ಬಾಳೆಹಣ್ಣು...!



ಅಲ್ಲಿಂದ ಸೀದಾ ಹೊರಟಿದ್ದು ತಿರುನೆಲ್ಲಿ ದೇವಸ್ಥಾನಕ್ಕೆ. ಪ್ರಕೃತಿಯ ಮಡಿಲಲ್ಲಿರುವ, ಹಸಿರು ಬೆಟ್ಟಗಳ ಮಧ್ಯೆ ಸಾಗಿ, ದೇವರ ದರ್ಶನ ಕಿಟಕಿಯಿಂದಲೇ ಮಾಡಿದೆವು...!! ದೇವಸ್ಥಾನದ ಪುನರುತ್ಥಾನ ಕೆಲಸ ಕಾರಣದಿಂದ ದರ್ಶನ ಭಾಗ್ಯ ಸಿಗಲಿಲ್ಲ.



"ಎಡಕಲ್ಲು ಗುಡ್ಡ" ತಲುಪಿದಾಗ ಮಧ್ಯಾನ್ಹ ೧೨.೩೦, ತುಂಬ ಬಿಸಿಲು ಇದ್ದ ಕಾರಣ ಯಾರು ಬೆಟ್ಟ ಹತ್ತುವ ಧೈರ್ಯ ಮಾಡಲಿಲ್ಲ.....!! ದೂದ್ ಪೇಡ ಸುಮ್ಮನಿದ್ದ......!!! ಬೆಟ್ಟ ಹತ್ತುವುದರಲ್ಲಿ ನಮ್ ಟೀಂ ನಲ್ಲಿ ಅವನದು ಎತ್ತಿದ ಕೈ.(ಕಾಲು)..

ಸ್ವಲ್ಪ ವಿಚಾರ ವಿಮರ್ಶೆ, ಘರ್ಷಣೆ ನಂತರ ಡಿಂಗ "ಸೂಚಿಪ್ಪರ" ಜಲಪಾತಕ್ಕೆ ಹೋಗಲು ಒಪ್ಪಿದ. ಅಲ್ಲಿಗೆ ಹೋಗಿಲ್ಲದಿದ್ದರೆ ನಾವು ನಿಜವಾದ ಕೇರಳ ಸೌಂದರ್ಯ ಮಿಸ್ ಮಾಡಿಕೊಳ್ತಾ ಯಿದ್ವಿ.... "ಹ್ಯಾರಿಸೋನ್ ಮಲಯಾಳಂ ಟೀ ಎಸ್ಟೇಟ್ " ಒಂದು ನಿಸರ್ಗ ರಮಣೀಯ ಪ್ರದೇಶ...ಎಲ್ಲೆಲ್ಲೂಹಸಿರು ಹಸಿರು ಬೆಟ್ಟಗಳು...!! ವಾಹ್....!! ಮಧ್ಯೆ ಜಲಪಾತ..!!! ಅಲ್ಲಿ ಡ್ರೈವ್ ಮಾಡುವುದೇ ಖುಷಿ..!!ಡಿಂಗ ಈಗ ಸ್ವಲ್ಪ ಸಮಾಧಾನದಲ್ಲಿದ್ದ..!!!ಸುಚಿಪ್ಪರ ಜಲಪಾತ ನೋಡಲು ಲೋಕಲ್ ಜೀಪ್ ಮಾಡಿಕೊಂಡು ಹೀಗೆ ಹೋಗಿ ಹಾಗೆ ನೋಡಿಕೊಂಡು ಬಂದ್ವಿ....!! ತೆಗದುಕೊಂಡ ಸಮಯ ಬರೋಬ್ಬರಿ ೨೦ ನಿಮಿಷಗಳು...!!!! ಕಾರಣ ಡಿಂಗನ ಅವಸರ...!! ಮುಂದಿನ ಕಾರ್ಯಕ್ರಮಕ್ಕೆ ಅಡಚಣೆ, ವಿಳಂಬ ಆಗಬಾರದೆಂಬ ಬಯಕೆ...!!! ಜಲಪಾತ ನಿಜಕ್ಕೂ ಸುಂದರವಾಗಿದ್ದು...ಜಲಕ್ರೀಡೆಗೆ ಸೂಕ್ತವಾದ, ಕುಟುಂಬ, ಗೆಳೆಯರು, ಒಮ್ಮೆ ನೋಡಲೇಬೇಕಾದ ಜಾಗ.ಸತತ ೨ ಗಂಟೆಗಳ ಡ್ರೈವ್ ಮಾಡಿ ಎಲ್ಲರನ್ನು home stay ವಾಪಾಸ್ ಕರೆತಂದಾಗ ೮.೩೦ ಆಗಿತ್ತು.
ಒಳ್ಳೆ ಊಟ, ಫೈರ್ ಕ್ಯಾಂಪ್...ಹಾಡು, ಕುಣಿತ... ಒಟ್ಟಾರೆ Rocking !!



ಮರುದಿನ ೨೧ ಡಿಸೆಂಬರ್ ಸಂಡೇ....ಇಬ್ಬನಿ ಹಿತವಾಗಿ ಯಿದ್ದರಿಂದ ಹೂವಿನ ಅಂದ ಹೆಚ್ಚ್ಚಿತ್ತು...!! ಪ್ರತಿ ಸಲದಂತೆ ಈ ಬಾರಿಯೂ ನನ್ನ ಫೋಟೋ ತೆಗೆಯುವ ಕೆಲಸ ಮುಂದುವರೆಸಿದೆ...!!.....ಈ ಸಲ ಫೋಟೋಕ್ಕೆ ಅರವಿಂದ ಮೆಚ್ಚುಗೆ ಹೇಳಿದ, ಮುಂದಿನ ಪ್ರವಾಸಗಳಲ್ಲಿ ಇನ್ನೂ ಹೆಚ್ಚಿನ ತೊಂದರೆ ಕೊಡುವ ನಿರ್ಣಯ ತೆಗೆದುಕೊಂಡೆ..!!



ಬನವಾಸಿ, ಅರವಿಂದ, ದೂದ್ ಎಲ್ಲ ತುಂಬ ಜೋಶ್ ನಲ್ಲಿ ಇದ್ರು...ಬೆಳಗ್ಗೆ ಬೆಳಗ್ಗೆ ಬ್ಯಾಡ್ಮಿಂಟನ್ ಆಟ ಶುರುಮಾಡಿ ಬಿಟ್ಟಿದ್ರು.. !! ಸತತ ೨ ತಾಸು ಆಡಿ, ಮೈಕೈ ಎಲ್ಲ ನೋವು ಮಾಡಿಕೊಂಡು....ತಿಂಡಿ ಸಮಯಕ್ಕೆ ಭರ್ಜರಿ ಬ್ಯಾಟಿಂಗ್ ಮಾಡ್ಬಿಟ್ರು...!!!


ಯಿರ್ಪು ಜಲಪಾತಕ್ಕೆ ಹೊರಟಾಗ ಕಾರ್ ನ ಟೈರ್ ಪಂಕ್ಚರ್ ಆಗಿತ್ತು. ೪ ಜನ ಧಾನ್ಡಿಗರನ್ನ ಹೊತ್ತು ಅದಕ್ಕೂ ಸಾಕಾಗಿರಬೇಕು...ಪಾಪ...!ಯಿರ್ಪು ಜಲಪಾತ ದಲ್ಲಿ ನೀರಿನ ಸೆಳೆತಕ್ಕೆ ಮೈ ಒಡ್ಡಿ ನಿಂತು, ನೀರಲ್ಲಿ ಆಟ ಆಡಿ, ಸಕತ್ ಮಜ ಬಂತು.ಅಲ್ಲಿಂದ ಹೊರಟು ಮಧ್ಯಾನ್ನ ದಾಭಾ ನಲ್ಲಿ ಊಟ ಮಾಡಿದ್ವಿ.
home stay ವಾಪಾಸ್ ಬಂದು ಬಟ್ಟೆ ಬರೆ ಎಲ್ಲ ಪ್ಯಾಕ್ ಮಾಡಿ, ಮಾಲೀಕರಿಗೆ ಒಂದು ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರೆಟೆವು. ಅಂದದೂರು ಬೆಂಗಳೂರಿಗೆ ವಾಪಾಸ್ ಬಂದಾಗ ಸಂಜೆ ೮ ಗಂಟೆ.




ಒಟ್ಟು ಪ್ರಯಾಣ - ೫೮೫ ಕಿ. ಮೀ.

Tuesday, January 27, 2009

ವರ್ಷದ ಕೊನೆಯ ಪ್ರವಾಸ...೨೦೦೮

ಈ ವರ್ಷದ ಕೊನೆಯ ಪ್ರವಾಸವನ್ನ ನಾನು ನಿರ್ಧರಿಸಿ ಆಗಿತ್ತು. ಅದರಂತೆ ಕ್ರಿಸ್ಮಸ್ ರಜೆಯ ವೇಳೆ ನಮ್ಮ ಊರಿಗೆ ಹೋಗುವುದು, ಅಲ್ಲಿಂದ ಸಾತೊಡ್ಡಿ ಜಲಪಾತ ವೀಕ್ಷಣೆ ಅಂಥ ಹೇಳಿದ್ದೆ. ಆದರೆ ದೂದ್ ಪೇಡ ಯಾಕೋ ಸಮಾಧಾನ ಆದಂಗೆ ಅನ್ನಿಸಲಿಲ್ಲ...ಅವನಿಗೆ ಪೂರ್ತಿ ೪ ದಿನ ರಜೆಯನ್ನು ಸುಮ್ಮನೆ ಕಳೆಯಲು ಇಷ್ಟವಿರಲಿಲ್ಲ. ಹಾಗಾಗಿ ೪ ದಿನದ ಪ್ರಯಾಣವನ್ನು ರೂಪರೇಷೆಯನ್ನು ಸಿದ್ಧಪಡಿಸಿ, ಹಣಕಾಸಿನ ವ್ಯವಸ್ಠೆ ಮಾಡಿ ಬಿಟ್ಟಿದ್ದ...!! ಜೈ ದೂದ್ ಪೇಡ...!!!

೨೪ ರಾತ್ರಿ ಸಾಗರಕ್ಕೆ ಹೋಗಲು ೪ ಟಿಕೆಟ್ ನ್ನು ಬನವಾಸಿ ಟ್ರೈನ್ ಗೆ ಬುಕ್ ಮಾಡಿ ಮೇಲ್ ಕಳಸಿದ. ಡಿಂಗನ ಮಡದಿಯ
ಅಪ್ಪಣೆ ಯಿಲ್ಲದ ಕಾರಣ ಡಿಂಗ ಈ ಪ್ರವಾಸಕ್ಕೆ ಚಕ್ಕರ್...!

೨೫ ಡಿಸೆಂಬರ್ ಗುರುವಾರ, ಬೆಳಿಗ್ಗೆ ೭.೩೦ ಕ್ಕೆ ಸಾಗರದ ನಮ್ಮ ಮನೆಯಲ್ಲಿ ತಿಂಡಿ ತಿಂದು, ಸ್ವಲ್ಪ ಸ್ನಾನ ಮಾಡಿದ್ವಿ. "ಸ್ವೀಟಿ" ಲಾಂಗ್ ಟ್ರಿಪ್ ಹೊರಡಲು ರೆಡಿಯಿದ್ದಳು....!! ( ನನ್ನ ಝೆನ್ ಕಾರ್ ಗೆ ಇಟ್ಟ ಹೆಸರು ಸ್ವೀಟಿ). ಅವಳಿಗೂ ಹೊಟ್ಟೆಗೆ ತುಂಬಿಸಿ (ಪೆಟ್ರೋಲ್) ಸಾಗರ ಬಿಟ್ಟಾಗ ೧೦.೨೦.

ಸಿರ್ಸಿ ತಲುಪಿದಾಗ ೧೨ ಗಂಟೆ. ಮೊದಲು "ಗಣಪತಿ ದೇವಸ್ಥಾನ" ಕ್ಕೆ ಹೋಗಿ ದರ್ಶನ ಮಾಡಿದೆವು. ಅಲ್ಲಿಂದ ಪ್ರಸಿದ್ಧ "ಮಾರಿಕಾಂಬ ದೇವಸ್ಥಾನ" ಕ್ಕೆ ಹೋದೆವು. ಅರವಿಂದ "ಕೋಣ" ನೋಡಿ ಹೆದರಿಬಿಟ್ಟ...!!ಮಧುವನ ಹೋಟೆಲ್ ನಲ್ಲಿ ಊಟ ಮಾಡಿ "ಸಹಸ್ರಲಿಂಗ" ಕ್ಕೆ ಹೋದ್ವಿ.

ಸಹಸ್ರಲಿಂಗ ಹೆಸರೇ ಹೇಳುವಂತೆ ನದಿಯ ಮಧ್ಯದಲ್ಲಿ ನೂರಾರು ಲಿಂಗ, ಬಸವನ ವಿಗ್ರಹಗಳು ಇವೆ. ಹಚ್ಚ ಹಸಿರಿನ ಕಾಡಿನ ಮಧ್ಯೆಯಿರುವ ನದಿಯಲ್ಲಿ ತುಂಬ ಸಮಯ ಆಟ ಆಡಿದೆವು. ಬನವಾಸಿ ವಿವಿಧ ಭಂಗಿ ಯಲ್ಲಿ ನಿಂತು ಫೋಟೋಕ್ಕೆ ಪೋಸು ಕೊಟ್ಟ.ಅಲ್ಲಿಂದ ಹೊರಟಿದ್ದು "ಗಣೇಶ್ ಫಾಲ್" ಗೆ. ಯಿನ್ನು ೨ ಕಿ. ಮೀ. ಯಿರುವಾಗ ನನ್ನ ಅಜಾಗರೂಕತೆ ಯಿಂದಾಗಿ ನಮ್ಮ ಕಾರು ಚರಂಡಿ ಗೆ ಬಿತ್ತು. ಅಕ್ಕ ಪಕ್ಕ ಯಿದ್ದವರನ್ನು ಸಹಾಯಕ್ಕೆ ಕರೆದು ಅಂತು ಕಾರನ್ನು ರಸ್ತೆ ಗೆ ಎತ್ತಿ ಇಟ್ತ್ವಿ. ಸಧ್ಯ ನಮಗೂ ಕಾರಿಗೂ ಏನೂ ಆಗಿರಲಿಲ್ಲ...!!!!ಮುಂದಿನ ಪ್ರಯಾಣವನ್ನು ಅಲ್ಲಿಗೆ ಮೊಟಕುಗೊಳಿಸಿ ಸೀದಾ "ಯಲ್ಲಾಪುರ" ಕ್ಕೆ ಹೊರಟೆವು. ಸಿಹಿಯಾದ ಸೌತೆಕಾಯಿ ತಿನ್ನುತ್ತಾ ಯಲ್ಲಾಪುರ ತಲುಪಿದಾಗ ಸಂಜೆ ೫.೩೦.ಅಲ್ಲಿ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ "ಕವಡಿ ಕೆರೆ" ಗೆ ಪ್ರಯಾಣ ಮಾಡಿದ್ವಿ. ಕವಡಿಕೆರೆ ಸುಮಾರು ೬೦ ಎಕರೆ ದೊಡ್ಡದಾದ ಕೆರೆ. ದಡದಲ್ಲಿ "ಕವಡಿಯಮ್ಮ" ದೇವಸ್ಥಾನ. ಸುಂದರ, ಶಾಂತವಾದ, ನಯನ ಮನೋಹರ ಮುಸ್ಸಂಜೆ, ವಾಪಸ್ಸು ಹೊರಡಲು ಮನಸ್ಸೇಯಿರಲಿಲ್ಲ... ಎಲ್ಲರಿಗೂ ತುಂಬ ಯಿಷ್ಟವಾದ ಜಾಗ....!!

೨೬ ಶುಕ್ರವಾರ ಬೆಳಿಗ್ಗೆ ಬೇಗನೆ ಎದ್ದು "ಜೇನುಕಲ್ಲು" ಗುಡ್ಡಕ್ಕೆ ಹೋದೆವು. ದೂದ್ ಪೇಡ ತುಂಬಾ ಜೋಶ್ ನಲ್ಲಿ ಯಿದ್ದ.....ಗುಡ್ಡ ಅವನ ಫೇವರಿಟ್..!!!ಕಾಳಿ ನದಿ ಕಣಿವೆ, ನಿತ್ಯಹರಿದ್ವರ್ಣದ ಕಾಡು, ಸುಂದರ ಸೂರ್ಯೋದಯ - ಜೇನುಕಲ್ಲು ಗುಡ್ಡದ ವಿಶೇಷ.

ಅಲ್ಲಿಂದ "ಮಾಗೋಡು ಜಲಪಾತ"ಕ್ಕೆ ಪಯಣ. ಜಲಪಾತದಲ್ಲಿ ನೀರು ಸ್ವಲ್ಪ ಕಡಿಮೆಯೇ ಯಿತ್ತು. ಮುಂಜಾನೆ ಹೋಗಿದ್ದರಿಂದ ಜನರು ಸಹ ಯಿರಲಿಲ್ಲ. ಪ್ರಕೃತಿ ಯಾ ನಿಜವಾದ ಸೌಂದರ್ಯ ಅಲ್ಲಿ ನೋಡಿ ವಾಪಾಸ್ ಯಲ್ಲಾಪುರಕ್ಕೆ ಬಂದೆವು.

"ಸಾತೊಡ್ಡಿ ಜಲಪಾತಕ್ಕೆ" ಹೋಗುವ ದಾರಿ ಸ್ವಲ್ಪ ಕಠಿಣ, ಕಚ್ಚಾ ರಸ್ತೆ, ಎಷ್ಟು ಹೋದರು ಜಲಪಾತದ ಸುಳಿವೇಯಿಲ್ಲ. ಯಾವ ವಾಹನದ ಸುಳಿವೂ ಯಿಲ್ಲ. ಇನ್ನೇನು ವಾಪಾಸ್ ಹೋಗುವುದು ಅಂಥ ನಾವು ಹೇಳಿದೆ. ಬನವಾಸಿ ಏನಾದ್ರು ಆಗ್ಲಿ ಮುಂದೆ ಹೋಗಿ ನೋಡಿಯೇ ಬಿಡೋಣ ಅಂಥ ಧೈರ್ಯ ತುಂಬಿದ. ಸ್ವಲ್ಪ ದೂರ ಹೋದಾಗ ಒಂದು ಹಿಂದೂ ಹುಡುಗರು ನೀರಲ್ಲಿ ಆಟ ಆಡ್ತಾ ಯಿರೋದು ಕಾಣಿಸ್ತು. ಸಧ್ಯ ಅವರ ಬಳಿ ಕೇಳೋಣ ಅಂಥ ಹೋದ್ರೆ, ಅವರಿಗೂ ಗೊತ್ತಿಲ್ಲ...ಅವರು ಕೂಡ ಬೇರೆಯವರು ಬರಲಿ ಅಂಥ ಕಾಯುತ್ತ ಯಿದ್ರು....!! "ಕಾಳಿ ನದಿ ಹಿನ್ನೀರು ಪ್ರದೇಶ" ನಿಜಕ್ಕೂ ಅದ್ಬುತ. ಅಲ್ಲಿ ಸ್ವಲ್ಪ ಹೊತ್ತು ತಣ್ಣನೆಯ ಗಾಳಿ ಸೇವಿಸ್ತ ಯಿದ್ವಿ, ದೂದ್ ಆಗಲೇ ಸ್ವಲ್ಪ ದೂರ ಹೋಗಿ ಆಗಿತ್ತು....ಅದು ಅವನ ಚಟ..!! ಒಂದು ಕಡೆ ಸುಮ್ಮನೆ ನಿಲ್ಲಲಿಕ್ಕೆ ಆಗೋಲ್ಲ ಅವನಿಗೆ..!!ಅಲ್ಲಿಂದ ಸಾತೊಡ್ಡಿ ಜಲಪಾತಕ್ಕೆ ಬಂದಾಗ ಗಂಟೆ ೧. ಅಬ್ಭಾ!!! ನಿಜಕ್ಕೂ ರಮಣೀಯ ಜಲಪಾತ. ಕರ್ನಾಟಕದ ನಯಾಗರ ಅಂತಲೂ ಹೇಳಬಹುದು. ಹುಡುಗರು ತುಂಬ ಖುಷಿ ಆದರು.. ಸೀದಾ ಜಲಪಾತದ ಬುಡದ ತನಕ ಹೋದ್ವಿ...ನೀರಿನ ರಭಸಕ್ಕೆ ಬೆನ್ನು ಕೊಟ್ಟು ನಿಂತು ಸ್ನಾನ ಮಾಡುವುದು ಅತ್ಯಂತ ಯಿಷ್ಟ ಅರವಿಂದ ನಿಗೆ. ಈ ಸಲ ದೂದ್ ಅರವಿಂದ ನ್ನು ಕರೆದುಕೊಂಡು ಜಲಪಾತದ ಒಂದು ಸುತ್ತು ಹಾಕಿದ....!! ಸಧ್ಯ "ಇಷ್ಟೇನಾ.....?" ಅಂಥ ದೂದ್ ಹೇಳಲಿಲ್ಲ....!! ಅಲ್ಲಿಗೆ ಹೋಗಿದ್ದು ಸಾರ್ಥಕ...!!ಅಲ್ಲಿಂದ ವಾಪಾಸ್ ಬರಲು ನನಗೂ ಇಷ್ಟ ಯಿರಲಿಲ್ಲ...ಅಷ್ಟು ಸುಂದರ ಜಲಪಾತ..!!

ಅಲ್ಲಿಂದ "ಅರಬೈಲ್" ಘಾಟಿ ಮುಖಾಂತರ "ಗೋಕರ್ಣ" ಕ್ಕೆ ಹೋದಾಗ ಸಂಜೆ ೭ ಗಂಟೆ ಆಗಿತ್ತು. ಬೀಚ್ ಪಕ್ಕ ಗುಡಿಸಲಿನಲ್ಲಿ ರಾತ್ರಿ ಕಳೆಯುವ ಬಗ್ಗೆ ಬನವಾಸಿ ಆಲೋಚನೆ ಮಾಡಿದ..ಓಂ ಬೀಚ್ ಒಂದು ರೌಂಡು ಹಾಕಿ ಬಂದ್ರು ಒಂದೇ ಒಂದು ಗುಡಿಸಲು ಸಿಗಲಿಲ್ಲ. ಲಾಡ್ಜ್ ಮಾಡಿ ರಾತ್ರಿ ಕಳೆಯುವ ನಿರ್ಧಾರ ಮಾಡಿದೆವು. ಗೋಕರ್ಣದಲ್ಲಿ ಯಾವುದೇ ಲಾಡ್ಜ್ ಸಿಗದೇ ಪರದಾಡಿ ಸುಸ್ತಾದಾಗ ಬನವಾಸಿ ಯಾ ಗೆಳೆಯನ ಗೆಳೆಯ ಆಪಧ್ಬಂದವನಂತೆ ಬಂದು ಸಹಾಯ ಮಾಡಿ ಒಂದು ಲಾಡ್ಜ್ ಕೊಡಿಸಿದ. ಅಲ್ಲಿ ಹೊದೆಯಲು ಏನೂ ಕೊಡಲಿಲ್ಲ....ನಾನು ಅರವಿಂದ ನ ಪಂಚೆಯನ್ನೇ ಹೊದ್ದು ಮಲಗಿದೆ...ಪಾಪ ದೂದ್ ಗೆ ನಿದ್ದೆ ಬರಲಿಲ್ಲ...!!!

೨೭ ಶನಿವಾರ ಬೆಳಿಗ್ಗೆ ತಣ್ಣೀರು ಸ್ನಾನ ಮಾಡಿ " ಮಹಾಭಲೇಶ್ವರ ದೇವಸ್ಥಾನ" "ಆತ್ಮಲಿಂಗ" ದರ್ಶನ ಮಾಡಿದೆವು. ಹಾಗೆ ಒಂದು ರೌಂಡು ರಥ ಬೀದಿ, ಬೀಚ್, ಪುಣ್ಯಕೋಟಿ ಪುಷ್ಕರಣಿ ಸುತ್ತಾಡಿ ಓಂ ಬೀಚ್ ಗೆ ಹೊರಟೆವು.

ಓಂ ಬೀಚ್ ನಲ್ಲಿ ಸನ್ ಬಾತ್ ಮಾಡಿ, ಸ್ವಲ್ಪ ಹೊತ್ತು ಸಮುದ್ರ ಸ್ನಾನ ಮಾಡಿದ್ವಿ. ದೂದ್ ಸಮುದ್ರಕ್ಕೆ ಯಿಳಿಯಲಿಲ್ಲ.....ಉದ್ದಕ್ಕೆ ರೌಂಡು ಹೋಗಿ ಹಿಪ್ಪಿಗಳ ದರ್ಶನ ಭಾಗ್ಯ ಪಡೆದ....!!! ಉರಿ ಬಿಸಿಲಿನಲ್ಲೂ ತಂಪು ಕನ್ನಡಕ ಹಾಕಿಕೊಂಡು ಹಿಪ್ಪಿಗಳನ್ನು ನೋಡಿ ಮತ್ತಷ್ಟು ತಣ್ಣಗಾದ...!!ಮಧ್ಯಾನ್ನ ಅಲ್ಲಿಂದ ಹೊರಟು "ಇಡಗುಂಜಿ" ಗೆ ಬಂದು "ಮಹಾಗಣಪತಿ" ದೇವರ ದರ್ಶನ, ಅರ್ಚನೆ ಮಾಡಿಸಿ ಸ್ವಲ್ಪ ಶಾಪಿಂಗ್ ಮಾಡಿದ್ವಿ.

ಸಂಜೆ ಸೂರ್ಯಾಸ್ತ ನೋಡಲು "ಮುರುಡೇಶ್ವರ" ಕ್ಕೆ ಹೋಗಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡು ಸ್ವಲ್ಪ ಬೇಜಾರು ಆಯ್ತು. ಆದ್ರೆ ಅಲ್ಲಿನ ಮೋಹಕ ಸಮುದ್ರ, ಎತ್ತರದ ಗೋಪುರ, ಶಿವನ ವಿಗ್ರಹ ಎಲ್ಲವೂ ಮನಸೂರೆಗೊಂಡವು. ಅಲ್ಲಿವರೆಗಿನ ಆಯಾಸ ದಣಿವು ಎಲ್ಲ ಮಾಯಾ...!! ಗೋಪುರ, ವಿಗ್ರಹ ದ ಕೆತ್ತನೆ ಎಲ್ಲದಕ್ಕೂ ಹ್ಯಾಟ್ಸ್ ಆಪ್...!! ಸಂಜೆ ಅಲ್ಲೇ ಊಟ ಮಾಡಿ ಸ್ವೀಟಿ ಗು ಸ್ವಲ್ಪ ಹೊಟ್ಟೆಗೆ ಹಾಕಿಸಿ ಅಲ್ಲಿಂದ ಗೇರುಸೊಪ್ಪ ಮಾರ್ಗವಾಗಿ ಸಾಗರ ತಲುಪಿದಾಗ ರಾತ್ರಿ ೧೧ ಗಂಟೆ....!!

ಒಂದು ನೆನಪಿನಲ್ಲಿ ಉಳಿಯುವಂಥ ಪ್ರವಾಸ....ಸಕತ್ ಮಜ ಬಂತು...ದೂದ್ ಖುಷಿ ಆದ...!!

ಒಟ್ಟು ಪ್ರಯಾಣ - ೫೬೦ ಕಿ. ಮೀ.